ಕಾಂಗ್ರೆಸ್ಸಿಗರಿಗೆ ಆರ್.ಎಸ್.ಎಸ್ ಅಪತ್ಯವಾದರೆ ನಿಮಗೂ ಅಪತ್ಯವೇನಣ್ಣಾ?
ಇವರಿಗೆ ಮೊದಲು ತೋಚುವುದೇ ಅದು. ದೇಶದ ಹಿತಾಸಕ್ತಿಯ ವಿರುದ್ದ ಯಾರೋ ಹೇಳಿಕೆ ಕೊಟ್ಟಾಗ, ಮತ್ತಾರೋ ಅವರ ಮೇಲೆ ಹಲ್ಲೆ ಮಾಡಿರಲಿ, ಚಪ್ಪಲಿ ಎಸೆದಿರಲಿ ಅಥವಾ ಕಲ್ಲು ತೂರಿರಲಿ. ಇವರು ಮೊದಲು ಹುಡುಕುವುದೇ ಆ ಹಲ್ಲೆಮಾಡಿದ ವ್ಯಕ್ತಿಗೆ ಆರ್.ಎಸ್.ಎಸ್ ಸಂಪರ್ಕವಿದೆಯಾ? ಎಂದಾದರೂ ಸಂಘದ ಶಾಖೆಗೆ ಹೋಗಿದ್ದನ? ಎಲ್ಲಿಯಾದರು ಅವನು ಗಣವೇಷ ತೊಟ್ಟ ಪೋಟೋ ಇದೆಯಾ? ಒಂದು ಕುರುಹು ಸಿಕ್ಕರೆ ಸಾಕು ಇವರು ಪ್ರೆಸ್ ಕಾನ್ಪರೆನ್ಸಿಗೆ ದೌಡಾಯಿಸುತ್ತಾರೆ, ಟಿವಿ ಕ್ಯಾಮರಾ ಮುಂದೆ ನಿಂತು ತವಡುಕುಟ್ಟಲು ಶುರುವಿಡುತ್ತಾರೆ, ಈ ಪ್ರಕರಣದಲ್ಲಿ ಆರ್.ಎಸ್.ಎಸ್ ನ ಕೈವಾಡವಿದೆ ಎಂದು ಅಬ್ಬರಿಸುತ್ತಾರೆ. ಇದು ಆರ್.ಎಸ್.ಎಸ್ ಕುತಂತ್ರ ಎಂದೆಲ್ಲಾ ಬಡಬಡಾಯಿಸುತ್ತಾರೆ. ಒಟ್ಟಿನಲ್ಲಿ ಎಲ್ಲದಕ್ಕೂ ಆರ್.ಎಸ್.ಎಸ್ ಕಾರಣ ಎಂದು ಹಣೆಪಟ್ಟಿ ಕಟ್ಟುವ ಜಾಯಮಾನ ಕಾಂಗ್ರೇಸ್ಸಿಗರದು. ಇವರು ಹೀಗೆಂದಿದ್ದೇ ತಡ ಎನ್.ಡಿ.ಟಿ.ವಿ , ಸಿಎನ್ಎನ್-ಐಬಿನ್ ನಂತಹ ಕಾಂಗ್ರೇಸ್ ಕೃಪಾ ಪೋಷಿತ ಮಾಧ್ಯಮಗಳು ಗಂಟೆಗಟ್ಟಲೇ ಚರ್ಚೆಗೆ ಕುಳಿತು ಬಿಡುತ್ತವೆ.
ಈಗ ನೋಡಿ, ಅಣ್ಣಾ ಹಜಾರೆಯೆಂಬ ಗಾಂಧಿವಾದಿ ಭ್ರಷ್ಠಾಚಾರದ ವಿರುದ್ದ ಬಹುದೊಡ್ಡ ಹೋರಾಟ ಕಟ್ಟಿದರು. ಉಪವಾಸಕ್ಕೆ ಕೂತರು. ವಿಧ್ಯಾರ್ಥಿಗಳಿಂದ ಹಿಡಿದು ಆಬಾಲ ವೃದ್ದರವರೆಗೆ ಎಲ್ಲರೂ ಅಣ್ಣಾ ಹೋರಾಟಕ್ಕೆ ಸಾಥುನೀಡಿದರು. ಅನೇಕರು ತಾವೂ ಕೂಡ ಉಪವಾಸಕ್ಕೆ ಕೂತರು, ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಯಲ್ಲಿ ಪ್ಲೆಕಾರ್ಡ್ ಹಿಡಿದು ನಿಂತರು, ರಾಮಲೀಲಾ ಮೈದಾನ ಮತ್ತು ಜಂತರ್ ಮಂತರ್ ನೆಡೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಬಂದರು. ಉಪವಾಸ ಯಶಸ್ವಿಯಾಯಿತು. ಸರ್ಕಾರ ಮಂಡಿಯೂರಿತು. ಜನಲೋಕಪಾಲ್ ಮಸೂದೆ ತರಲು ಸಿದ್ದ ಎಂದು ಮಾತು ಕೊಟ್ಟಿತು. ಅಣ್ಣಾ ಉಪವಾಸ ಅಂತ್ಯಗೊಳಿಸಿದರು. ಇವೆಲ್ಲ ಆಗಿ ಕೆಲದಿನಗಳಾದವು ಈಗ ತನ್ನ ಹಳೇ ವರಸೆತೆಗೆದಿರುವ ಕಾಂಗ್ರೇಸ್ ಅಣ್ಣಾ ಹೋರಾಟ ಆರ್.ಎಸ್.ಎಸ್ ಪ್ರೇರಿತ ಎಂದು ಮತ್ತೆ ತಗಾದೆ ತೆಗೆದು ಕುಳಿತಿದೆ. ಇದು ಆರ್.ಎಸ್.ಎಸ್ ಸಂಘಟಿಸಿದ ಹೋರಾಟ ಆದ್ದರಿಂದ ಇದರ ಪಾವಿತ್ರ್ಯತೆ ಕುಗ್ಗಿದೆ. ಇದು ರಾಜಕೀಯ ಪ್ರೇರಿತ ಎಂದೆಲ್ಲಾ ಬಡಬಡಾಯಿಸುತ್ತಿದೆ. ಈ ಕಳಂಕ ಹಚ್ಚಿ ಹೋರಾಟದ ಕಾವು ತಣ್ಣಗೆ ಮಾಡಲು ಅದು ಎಂದಿನಂತೆ ನಾಲಗೆ ಹಿಡಿತವಿಲ್ಲದ ದಿಗ್ವಿಜಯ್ ಸಿಂಗ್ (ಕೆಲವರು ಡಾಗ್ ವಿಜಯ್ ಸಿಂಗ್ ಎಂದು ಅಣಕಿಸುತ್ತಾರೆಂಬುದು ಬೇರೆ ಮಾತು) ರನ್ನು ಬಳಸಿಕೊಂಡಿದೆ.
ದಿಗ್ವಿಜಯ್ ಸಿಂಗ್ ರದ್ದು ಕೇಳಬೇಕೆ ಮೊದಲೇ ಅದು ಆಚಾರವಿಲ್ಲದ ನಾಲಗೆ. ಮೊದಲಿನಿಂದಲೂ ಆರ್.ಎಸ್.ಎಸ್ ಎಂದರೆ ಉರಿಮೂತ್ರ ಬಂದವರಂತೆ ಆಡುವ ದಿಗ್ವಿಜಯ್ ಸಿಂಗ್, ಆರ್.ಎಸ್.ಎಸ್ ಬಗ್ಗೆ ಸದಭಿಪ್ರಾಯದಿಂದ ಮಾತನಾಡುತ್ತಾರೆಂದು ಬಯಸುವುದು ಮೂರ್ಖತನವಾಗುತ್ತದೆ. ಆದ್ದರಿಂದಲೇ ಪದೇ ಪದೇ ಮಾಧ್ಯಮಗಳು ಸಂದರ್ಶನಕ್ಕೆ ಕ್ಯಾಮರಾ ಮುಂದೆ ಕರೆದು ಮೈಕ್ ಹಿಡಿದಾಗಲೆಲ್ಲ ಇದೇ ಮಾತು ತೆಗೆಯುತ್ತಿದ್ದಾರೆ ’ಅಣ್ಣಾ ಹೋರಾಟ ರಾಜಕೀಯ ಪ್ರೇರಿತ, ಇದಕ್ಕೆ ಆರ್.ಎಸ್.ಎಸ್ ಬೆಂಬಲವಿತ್ತು, ಆ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ. ಸಂಘದ ಹಿರಿಯರಾದ ಸುರೇಶ್ ಭಯ್ಯಾ ಜೋಷಿ ಅಣ್ಣಾಗೆ ಬೆಂಬಲ ವ್ಯಕ್ತಪಡಿಸಿ ಬರೆದ ಕಾಗದ ನನ್ನಬಳಿ ಇದೆ. ಆರ್.ಎಸ್.ಎಸ್ ತನ್ನ ಸ್ವಯಂಸೇವಕರಿಗೂ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆನೀಡಿದ ಬಗ್ಗೆಯೂ ಸಾಕ್ಷಿ ಇದೆ, ರಾಮ್ ಮಾಧವ್ ಮತ್ತು ಗೋವಿಂದಾಚಾರ್ಯರು ಅಣ್ಣಾರ ವೇದಿಕೆಯಲ್ಲಿ ಕಾಣಿಸಿಕೊಂಡದ್ದೂ ಅಣ್ಣಾ ಹೋರಾಟದ ಹಿಂದೆ ಆರ್.ಎಸ್.ಎಸ್ ಇದೆ ಎನ್ನುವುದಕ್ಕೆ ಸಾಕ್ಷಿ’ ಎಂದು ಪದೇ ಪದೇ ಹೇಳುತ್ತಿದ್ದಾರೆ.
ಪ್ರಶ್ನೆಗಳೇಳುವುದೇ ಇಲ್ಲಿ. ಅಷ್ಠಕ್ಕೂ ಆರ್.ಎಸ್.ಎಸ್ ಅಣ್ಣಾ ಹೋರಾಟದಲ್ಲಿ ಪಾಲ್ಗೊಂಡರೆ ಇವರಿಗೇಕೆ ಕಳವಳ? ದೇಶದ ಅಷ್ಠೂ ಜನ ಜತ್ಯಾತೀತವಾಗಿ, ವರ್ಗಾತೀತವಾಗಿ, ಭಾಷಾತೀತವಾಗಿ ಅಣ್ಣಾ ಹೋರಾಟಕ್ಕೆ ಸ್ಪಂದಿಸಿದಾಗ ಎಂದಿನಿಂದಲೂ ದೇಶದ ಭ್ರಷ್ಠತೆ ತೊಲಗಬೇಕು, ಭ್ರಷ್ಠತೆ ತೊಲಗಿದಾಗ ಮಾತ್ರ ಭಾರತ ಮತ್ತಷ್ಠು ಬಲಶಾಲಿಯಾಗಲು ಸಾಧ್ಯ ಎಂಬ ನಿಲುವು ಹೊಂದಿರುವ ಮತ್ತು ಹಿಂದಿನಿಂದಲೂ ಭ್ರಷ್ಠಾಚಾರದ ವಿರುದ್ದ ಧ್ವನಿಯೆತ್ತಿರುವ, ಹೋರಾಟಗಳಿಗೆ ಬೆಂಬಲ ನೀಡಿರುವ ’ಸಂಘ’, ಅಣ್ಣಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದು ಒಂದು ಸಹಜ ಪ್ರಕ್ರಿಯೆ. ಅದು ಕೇವಲ ಅಣ್ಣಾಗೆ ವ್ಯಕ್ತಪಡಿಸಿದ ಬೆಂಬಲವಲ್ಲ ಅವರು ಕಟ್ಟಿದ ಹೋರಾಟಕ್ಕೆ ಮತ್ತು ಹೋರಾಟದ ಧ್ಯೇಯೋದ್ದೇಶಕ್ಕೆ ವ್ಯಕ್ತಪಡಿಸಿದ ಬೆಂಬಲ. ಭ್ರಷ್ಠಾಚಾರದ ವಿರುದ್ದದ ಹೋರಾಟವನ್ನು ಅಣ್ಣಾ ಅಲ್ಲದೇ ಬೇರಾರೇ ಮಾಡಿದ್ದರೂ, ಅಷ್ಠೇ ಏಕೆ ದಿಗ್ವಿಜಯ್ ಸಿಂಗ್ ನೇತೃತ್ವ ವಹಿಸಿದ್ದರೂ ಅಂತಹ ಹೋರಾಟದ ಉದ್ದೇಶ ದೇಶವನ್ನು ಮತ್ತಷ್ಠು ಶಕ್ತಿಯುತಗೊಳಿಸುತ್ತದೆ ಎಂಬುದಾಗಿದ್ದರೆ ದೇಶದ ಒಳಿತಿಗಾಗಿ ಸದಾ ತುಡಿಯುವ ಸಂಘ ಸಹಜವಾಗಿಯೇ ಬೆಂಬಲವ್ಯಕ್ತಪಡಿಸುತ್ತಿತ್ತು.
ಇನ್ನು ಇವರು ಸಂಘದ ಬಗ್ಗೆ ಮೂದಲಿಸುವುದನ್ನು ನೋಡಿದರೇ ಆಶ್ಚರ್ಯ. ಅಷ್ಟಕ್ಕೂ ಆರ್.ಎಸ್.ಎಸ್ ಈ ದೇಶದ ಸಂವಿಧಾನವನ್ನು ಧಿಕ್ಕರಿಸಿದ ಸಂಸ್ಥೆಯಲ್ಲ. ನಕ್ಸಲ್, ಸಿಮಿ, ಹಿಜ್ಬುಲ್, ಲಷ್ಕರ್ ತರಹ ದೇಶವಿರೋಧಿ ಚಟುವಟಿಕೆ ಮಾಡುವ ಸಂಘಟನೆಯಲ್ಲ. ದೇಶದ ಹಿತರಕ್ಷಣೆಯ ಪ್ರಶ್ನೆ ಬಂದಾಗ ನಾವು ಯುದ್ದಭೂಮಿಯಲ್ಲಿ ನಿಲ್ಲಲು ಸಿದ್ದ ಎಂದು ತೋರಿದ್ದು ‘ಸಂಘ’, ಭೂಕಂಪ, ಸುನಾಮಿ, ಅತಿವೃಷ್ಠಿಯಂತಹ ಪ್ರಕೃತಿ ವಿಕೋಪಗಳಿಗೆ ಸರ್ಕಾರದ ಸಂಸ್ಥೆಗಳಿಗಿಂತ ತ್ವರಿತವಾಗಿ ಸ್ಪಂದಿಸಿದ್ದು ‘ಸಂಘ’, ಸರ್ಕಾರಿ ಶಾಲೆಗಳು ತಲುಪದಂತಹ ಕಾಡಿನ ಬುಡಕಟ್ಟು ಪ್ರದೇಶಗಳಲ್ಲಿ ಅಕ್ಷರ ಕಲಿಸಲು ಹೊರಟದ್ದು ‘ಸಂಘ’, ರೈಲ್ವೆ, ವಿಮಾನ ಅಪಘಾತಗಳಂತಹ ಭೀಕರ ಅವಘಡಗಳು ಸಂಭವಿಸಿದಾಗ ಮೊದಲು ಚಿಕಿತ್ಸೆಗೆ ಧಾವಿಸಿದ್ದು ‘ಸಂಘ’. ಹೀಗೆ ದೇಶಪ್ರೇಮ ಮೆರೆಯುವ ‘ಸಂಘ’ ಒಂದು ಹೋರಾಟದಲ್ಲಿ ಪಾಲ್ಗೊಂಡರೆ ಅದನ್ನು ಸಂಶಯದ ದೃಷ್ಠಿಯಿಂದ ನೋಡುವ ಕಾಂಗ್ರೇಸ್ಸಿಗರಿಗೆ ಹಾಗಾದರೆ ದೇಶಪ್ರೇಮ ಎಂಬುದೇ ಅಪತ್ಯವೇ?
ಅಷ್ಠಕ್ಕೂ ಕಾಂಗ್ರೇಸ್ಸಿಗರು ಕೊಂಚ ತಮ್ಮ ಪಕ್ಷದ ಇತಿಹಾಸವನ್ನೇ ಅವಲೋಕಿಸಿ ನೋಡಿಕೊಳ್ಳಬೇಕು. ತಮ್ಮದೇ ಪಕ್ಷದ ವರಿಷ್ಠ ಪಂಡಿತ್ ಜವಹರಲಾಲ್ ನೆಹರು ಕೂಡ ಆರ್.ಎಸ್.ಎಸ್ ಬಗ್ಗೆ ಸಧ್ಬಾವನೆ ಹೊಂದಿದವರೇನು ಅಲ್ಲ. ಆದರೆ ಯಾವಾಗ ಭಾರತ ಮತ್ತು ಚೀನಾ ಯುದ್ದದಲ್ಲಿ ಸೈನಿಕರಿಗೆ ಆಹಾರ, ಜೌಷದ ಇತ್ಯಾದಿ ಅಗತ್ಯಗಳನ್ನು ಪೂರೈಸಲು ಮತ್ತು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಲು ಸಂಘದ ಸ್ವಯಂಸೇವಕರು ಪ್ರಾಣದ ಹಂಗು ತೊರೆದು ಯುದ್ದ ಭೂಮಿಗೆ ಬಂದರೋ, ನೆಹರು ತಮ್ಮ ಪೂರ್ವಾಗ್ರಹವನ್ನು ಕಳಚಿಟ್ಟರು. ಸಂಘದ ಸ್ವಯಂಸೇವಕರು ಗಣವೇಷದಲ್ಲಿ ಕೆಂಪು ಕೋಟೆಯ ಮುಂದೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಕೂಡ ಯುದ್ದ ಭೂಮಿಯಲ್ಲಿ ಸೈನಿಕರ ಕೊರತೆಯುಂಟಾಯಿತು. ಆಗ ಪೊಲೀಸರನ್ನ ಯುದ್ದ ಭೂಮಿಗೆ ಕಳುಹಿಸಿಕೊಟ್ಟು, ಪೊಲೀಸರ ಸ್ಥಾನ ತುಂಬಿ ದೆಹಲಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಪಣ ತೊಟ್ಟು ನಿಂತದ್ದು ಇದೇ ಸಂಘದ ಸ್ವಯಂಸೇವಕರು. ಇದೆಲ್ಲಾ ಪದೇ ಪದೇ ಸಂಘದ ಬಗ್ಗೆ ಕುಹಕವಾಡುವ ದಿಗ್ವಿಜಯ್ ಸಿಂಗರಿಗೆ, ಕಾಂಗ್ರೇಸ್ಸಿಗರಿಗೆ ತಿಳಿದಿಲ್ಲವ?
ಅವರುಗಳು ಬಿಡಿ, ಸಂಘದ ಬಗ್ಗೆ ಪೂರ್ವಾಗ್ರಹ ಪೀಡಿತವಾಗಿಯೇ ಮಾತನಾಡುವವರು. ಅವರು ಅಣ್ಣಾ ಹೋರಾಟಕ್ಕೆ ಸಂಘದ ಬೆಂಬಲವಿದೆ ಎಂಬ ತಗಾದೆ ತೆಗೆದಾಗ, ಅಣ್ಣಾ ಹಜಾರೆಯವರು ಕೇವಲ ಒಂದು ಮಾತಿನಲ್ಲಿ ಅವರ ಈ ಚಾಳಿಗೆ ಚಾಟಿಬೀಸಬಹುದಿತ್ತು. ’ಹೌದು, ನಾನು ಕೈಗೊಂಡ ಹೋರಾಟ ದೇಶದ ಒಳಿತಿಗಾಗಿ ಕೈಗೊಂಡದ್ದು. ಇದರಲ್ಲಿ ಪಾಲ್ಗೊಳ್ಳಲು ಭಾರತದ ಅಷ್ಟೂ ಪ್ರಜೆಗಳು ಸ್ವತಂತ್ರರು. ನನ್ನ ಹೋರಾಟಕ್ಕೆ ಯಾವುದೇ ಪಕ್ಷ, ಮತ್ತು ಆರ್. ಎಸ್.ಎಸ್ ಒಳಗೊಂಡಂತೆ ಎಬಿವಿಪಿ, ಎಸ್ ಎಫ಼್ ಐ, ಅಥವಾ ಇನ್ಯಾವುದೇ ಸಂಘಟನೆ ಬೆಂಬಲ ನೀಡಿದ್ದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ, ಈ ಹೋರಾಟದಲ್ಲಿ ಪಾಲ್ಗೊಳ್ಳುವುದು ಎಲ್ಲರ ಹಕ್ಕು’ ಎಂದು ಬಿಟ್ಟಿದ್ದರೆ ಈ ಹೋರಾಟವನ್ನು ಹತ್ತಿಕ್ಕುವ ಕಾಂಗ್ರೇಸ್ಸಿಗರ ಸಂಚು ಮಗುಚಿ ಬೀಳುತ್ತಿತ್ತು. ಆದರೆ ಅಣ್ಣಾ ಹಜಾರೆ ಕೂಡ ’ದಿಗ್ವಿಜಯ್ ಸಿಂಗ್ ವಾದಕ್ಕೆ’ ಪ್ರತಿಯಾಗಿ ಆರ್.ಎಸ್.ಎಸ್ ಬೆಂಬಲ ತಿರಸ್ಕರಿಸುತ್ತಾ ಬಂದರು. ಇಷ್ಟು ದೊಡ್ಡ ಹೋರಾಟ ರೂಪಿಸಿದ ಅಣ್ಣಾಗೂ ಗೊತ್ತು, ಆ ಹೋರಾಟಕ್ಕೆ ಸಾವಿರ ಸಾವಿರ ಜನರು ಜಮೆಯಾಗುವಂತೆ ನೋಡಿಕೊಂಡವರಲ್ಲಿ, ಜಮಖಾನ ಹಾಸಿ, ಪೆಂಡಾಲು ಹಾಕಿದವರಲ್ಲಿ, ಹೋರಾಟದ ವಿಸ್ತಾರಕ್ಕೆ ಕಾರಣವಾದವರಲ್ಲಿ ಬಹುಪಾಲು ಸಂಘದ ಸ್ವಯಂಸೇವಕರಿದ್ದರೆನ್ನುವುದು. ಆದರೂ ಅಣ್ಣಾ ಆರ್.ಎಸ್.ಎಸ್ ಬೆಂಬಲವನ್ನು ಅನುಮೋದಿಸಲು ತಯಾರಿಲ್ಲ. ಕಾಂಗ್ರೇಸ್ಸಿಗರಿಗೆ ಆರ್.ಎಸ್.ಎಸ್ ಅಪತ್ಯವಾದರೆ ನಿಮಗೂ ಅಪತ್ಯವೇನಣ್ಣಾ?








RSS Annu keelagi kanuva congressigarige chappaliyalli hodeyabeku